ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ

ಇಮೇಜ್
ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ  ಎ.ಟಿ.ರಾಮಸ್ವಾಮಿ ಅರಕಲಗೂಡು:  ಹೇಮಾವತಿ ಜಲಾಶಯದಿಂದ  ತಾಲೂಕಿನ ಬಲ ಮೇಲ್ದಂಡೆ  ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಕ್ಷೇತ್ರ ಶಾಸಕರಾದ ಎ.ಟಿ.ರಾಮಸ್ವಾಮಿ ಶನಿವಾರ  ಚಾಲನೆ ನೀಡಿದರು.   ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು , ಈ ಬಾರಿ ಜಲಾಶಯದಲ್ಲಿ ನೀರು ಸಂಗ್ರಹ  ಉತ್ತಮವಾಗಿರುವ ಕಾರಣ ಮುಂಚಿತವಾಗಿಯೆ ನಾಲೆಗಳಿಗೆ ನೀರು ಹರಿಸಲಾಗಿದೆ,  ಕಳೆದ ಮೂರು  ವರ್ಷಗಳಿಂದ  ಈ ಕ್ರಮ ನಡೆಸಲಾಗುತ್ತಿದೆ.  ಜಲಾಶಯದ  ಎಡ ಮತ್ತು ಬಲ ದಂಡೆ ನಾಲೆಗಳಿಗಿಂತ ಬಲ ಮೇಲ್ದಂಡೆ ನಾಲೆ ಎತ್ತರದಲ್ಲಿದೆ. ಹೀಗಾಗಿ 15 ದಿನ ಮುಂಚಿತವಾಗಿ ಈ ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.   96.8 ಕಿ ಮೀ ಉದ್ದದ ಬಲ ಮೇಲ್ದಂಡೆ ನಾಲೆಯಲ್ಲಿ  907 ಕ್ಯೂಸೆಕ್ಸ್ ನೀರಿನ ಹರಿವಿನ ಸಾಮರ್ಥ್ಯ  ಇದ್ದು, 56 ಸಾವಿರ  ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.  6 ಸಾವಿರ  ಎಕರೆ ಭತ್ತದ ಬೆಳೆಗೆ  ಹಾಗೂ 50 ಸಾವಿರ ಎಕರೆಯಲ್ಲಿ ಅರೆ ನೀರಾವರಿ  ಬೆಳೆಗಳಿಗೆ ನಿರೊದಗಿಸುವ ಯೋಜನೆ ರೂಪಿಸಲಾಗಿದೆ.  ನಾಲಾ ವ್ಯಾಪ್ತಿಯಲ್ಲಿ 41 ವಿತರಣಾ ನಾಲೆಗಳು ಇದ್ದು 210 ಕೆರೆಗಳಿವೆ.  ಬಲ ಮೇಲ್ದಂಡೆ ನಾಲಾ ವ್ಯಾಪ್ತಿಯಲ್ಲಿ  146, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ 25,ಅಲ್ಲಾ ಪಟ್ಟಣ ಏತ ನೀರಾವರಿ ಯೋಜನೆಯಲ್ಲಿ 7,ಹಳ್ಳಿ ಮೈಸೂರು ಏತನೀರಾವರಿ ಯೋಜನೆಯಲ್ಲಿ 32 ಕೆರೆಗಳಿದ್ದು ಇವುಗಳನ್ನು  ತು