ಪೋಸ್ಟ್‌ಗಳು

ಆಗಸ್ಟ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಟಿ.ನರಸೀಪುರ:ವಿಪಕ್ಷ ನಾಯಕರಾದ ಸಿದ್ದರಾಮಯ್ಯ ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ.

ಇಮೇಜ್
ಟಿ.ನರಸೀಪುರ:ವಿಪಕ್ಷ ನಾಯಕರಾದ ಸಿದ್ದರಾಮಯ್ಯ ರವರು ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ. ದಲಿತರ ಪರವಾಗಿಯೇ ಕಳೆದ ೭೫ ವರ್ಷಗಳಿಂದ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು,ನಮ್ಮ ನಾಯಕರು, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ರವರು ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ.ಪಕ್ಷ ಹಾಗೂ ಸಿದ್ದರಾಮಯ್ಯ ರವರ ಬಗ್ಗೆ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ರವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ್ ತಿರುಗೇಟು ನೀಡಿದರು. ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷ ಹಾಗೂ ಅದರ ನಾಯಕರು ದಲಿತರನ್ನು ಹೇಗೆ ನೆಡೆಸಿಕೊಳ್ಳುತ್ತಿದ್ದಾರೆಂದು ರಾಜ್ಯ ಹಾಗೂ ರಾಷ್ಟ್ರದ ಜನತೆ ನೋಡುತ್ತಿದ್ದಾರೆ. ದಲಿತ ಶಾಸಕರು,ಸಂಸದರನ್ನು ಬಿಜೆಪಿ ಹಾಗೂ ಅದರ ನಾಯಕರು ಹೇಗೆ ನೆಡೆಸಿಕೊಂಡಿದ್ದಾರೆ,ಅವರಿಗೆ ಏನೆಲ್ಲಾ ಸ್ಥಾನ ಮಾನ ನೀಡಿದ್ದಾರೆಂದು ದಲಿತರು ಸೇರಿದಂತೆ ಪ್ರಜ್ಞಾವಂತರು ಗಮನಿಸುತ್ತಿದ್ದಾರೆಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಭ್ರಷ್ಟಾಚಾರ ಆರೋಪವನ್ನು ಹೊತ್ತಿರುವವರು ಎಷ್ಟೋ ಮಂದಿ ನಿಮ್ಮ ಪಕ್ಷದಲ್ಲೇ ಇದ್ದಾರೆ.ಮತ್ತೆ ಕೆಲವು ಸಂಸ್ಥೆಗಳಲ್ಲಿ ಕ್ರಿಮಿನಲ್ ಆರೋಪ ಹೊತ್ತಿರುವವರು ಇದ್ದರೂ ಸಹ

ಟಿ.ನರಸೀಪುರ:ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರ ವಿರೋಧ ಮಾಡದೆ ಸಹಕಾರ ನೀಡಬೇಕು ಎಂದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ.

ಇಮೇಜ್
ಟಿ.ನರಸೀಪುರ:ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರ ವಿರೋಧ ಮಾಡದೆ ಸಹಕಾರ ನೀಡಬೇಕೆಂದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ. ಜನಾಶೀರ್ವಾದ ಯಾತ್ರೆಗೆ ಟಿ.ನರಸೀಪುರಕ್ಕೆ ಆಗಮಿಸಿದ ಭಾರತ ಸರ್ಕಾರದ ಸಚಿವೆ ಶೋಭಕರಂದ್ಲಾಜೆಯವರನ್ನು ತಾಲ್ಲೂಕು ಬಿಜೆಪಿ ಘಟಕ ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರು.ಮಹಾಲಕ್ಷ್ಮಿ ಸಮೇತ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದ ಸಚಿವರು ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,ನ್ಯಾಯಾಧಿಕರಣದ ಮೂಲಕ ರಾಜ್ಯದಿಂದ ಸಮಯಕ್ಕೆ ಸರಿಯಾಗಿ ನೀರಿದ್ದಾಗ,ನೀರಿಲ್ಲದಾಗ ತಮಿಳುನಾಡಿಗೆ ಕರ್ನಾಟಕದಿಂದ ನೀರು ಬಿಡುತ್ತಿದ್ದು, ಮೇಕೆದಾಟು ವಿಚಾರವಾಗಿ ತಮಿಳುನಾಡು ಸಹಕರಿಸುವಂತೆ ಒತ್ತಾಯಿಸಿದರು. ಬಿಜೆಪಿ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರ ನೆಡೆಸುತ್ತಿದ್ದು ನರೇಂದ್ರಮೋದಿಯವರು ದೇಶದ ಜನರ ಹಿತ ಕಾಪಾಡುವಲ್ಲಿ ಶ್ರಮಿಸಿತ್ತಿದ್ದಾರೆಂದರು.ಪ್ರಮುಖವಾಗಿ ನಮ್ಮದು ರೈತ ಪ್ರಧಾನ ದೇಶ.ಆರಂಭದಲ್ಲಿ ಅಧಿಕಾರಕ್ಕೆ ಬಂದವರು ರೈತರನ್ನು ಮರೆತು ದೊಡ್ಡ,ದೊಡ್ಜ ಉದ್ಯಮಗಳ ಮೊರೆ ಹೋದರು.ಇಂದು ಆ ಉದ್ಯಮಗಳೆಲ್ಲಾಮುಚ್ಚಿ ಹೋಗಿವೆ.ರಾಜ್ಯದ ಒನ್ಜಿಎಫ್,ಎಚ್.ಎಂ.ಟಿ,ಸೇರಿ ಯಾವ್ಯಾವ ಉದ್ಯಮಗಳಿಗೆ ಹಣ ಹೂಡಿಕೆ ಮಾಡಿದ್ದರೊ ಅವೆಲ್ಲವೂ ಬಂದ್ ಆಗಿವೆ ಒಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು. ದೇಶದಲ್ಲಿ ರೈತರ

ಟಿ.ನರಸೀಪುರ:ಭಾರತೀಯ ಔದ್ಧ ಮಹಾಸಭಾ ತಾಲ್ಲೂಕು ಶಾಖೆ ವತಿಯಿಂದ ಉತ್ತಮ‌ ಅಂಕ ಪಡೆದ ‌ಮಕ್ಕಳಿಗೆ ಸನ್ಮಾನ

ಇಮೇಜ್
ಟಿ.ನರಸೀಪುರ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ವತಿಯಿಂದ ಎಸ್.ಎಸ್.ಎಲ್‌.ಸಿ. ಮತ್ತು ಪಿ‌.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಬೌದ್ಧ ಮಹಾಸಭಾ ಪ್ರತಿನಿಧಿಗಳ ಮಕ್ಕಳಾದ ಶೃಂಗಾ ಎಸ್.ಎನ್. ಪ್ರಜ್ಞಾ.ಎನ್. ಮನೋಜ್ ಕುಮಾರ್.ಆರ್.ರವರನ್ನು ಬೌದ್ಧ ಮಹಾಸಭಾ ತಾಲ್ಲೂಕು ಅಧ್ಯಕ್ಞ  ಎಂ.ಶ್ರೀಧರ್ ಸನ್ಮಾನಿಸಿದರು. ಪಟ್ಟಣದ ಮೆಗಾಸ್ಟಾರ್ ಡಾನ್ಸ್ ಕ್ಲಾಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುದ್ಧ- ಬಸವ-ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೇಣದ ಬತ್ತಿಯನ್ನು ಹಚ್ಚುವುದರ ಮೂಲಕ ಅದ್ಯಕ್ಷರಾದ ಎಂ.ಶ್ರೀಧರ್ ಮತ್ತು ತಂಡ ಚಾಲನೆ ನೀಡಿದರು. ಅಧ್ಯಕ್ಷ  ಎಂ.ಶ್ರೀಧರ್ ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಅವಕಾಶ ಸಿಕ್ಕರೆ ಎಲ್ಲಾ ರಂಗದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಕ್ಷಕ ನಾಗೇಶ್ ರವರ ಪುತ್ರಿ  623 ಅಂಕಗಳಿಸಿರುವುದೇ ಸಾಕ್ಷಿಯಾಗಿದೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ.ಆ ನಿಟ್ಟಿನಲ್ಲಿ ಮಕ್ಕಳು ಬಾಬಾಸಾಹೇಬರ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕೊಳ್ಳೇಗಾಲದ ಮುಖ್ಯ ಶಿಕ್ಷಕ ಮಹದೇವ್ ಕುಮಾರ್ ರವರು ಬಾಬಾಸಾಹೇಬರ ವಿಚಾರಧಾರೆಗಳನ್ನು ಮನನ ಮಾಡಿದರು. ಕಾರ್ಯದರ್ಶಿ ಮಹ

ವಾಹನ ಸವಾರರು ಹಾಗೂ ಮಾಲಿಕರಿಗೆ ಮುಖ್ಯ ಮಾಹಿತಿ.

ಇಮೇಜ್
ವಾಹನ ಮಾಲಿಕರು ಹಾಗೂ ಸವಾರರಿಗೆ ಮುಖ್ಯ ಮಾಹಿತಿ.    "ಪೊಲೀಸರು ನಿಮ್ಮ ವಾಹನ ಚೆಕ್ ಮಾಡಿದಾಗ ಇನ್ನೋರ್ವ ಪೊಲೀಸರಿಗೆ ಹೇಳಿ ಬಿಡಿಸಿಕೊಳ್ಳುವ ಪ್ರಯತ್ನ ಮಾಡದೇ, ನಿಮ್ಮ ವಾಹನದ RC, Insurance, PUC ಹಾಗೂ ನಿಮ್ಮ Driving Licence, Helmet ಇದ್ದರೆ ಮಾತ್ರ ನಮ್ಮ ಸಹಕಾರ ಪಡೆದುಕೊಳ್ಳಿ, ಆ ಕ್ಷಣಕ್ಕೆ ಮಾತ್ರ ನಿಮ್ಮನ್ನು ನಾವು ಸಹಕಾರ ಮಾಡಬಹುದು ಆದರೆ ಅನಾಹುತಕ್ಕೆ ಯಾರು ಸಹಾಯ ಮಾಡಲಾರರು. ಮೇಲಿನ ಎಲ್ಲಾ ಕಾಗದ ಪತ್ರಗಳು ಇದ್ದಲ್ಲಿ ಮಾರಣಹೋಮದಂತಹ ದುರ್ಘಟನೆ ಸಂಭವಿಸಿದಲ್ಲಿ ಸುಮಾರು 15,00,000=00 ರೂ. ವರೆಗೆ ವಿಮೆ ಬರುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ವಾಹನ Driving Licence ಇಲ್ಲದೆ ಯಾರೋಬ್ಬರಿಗೂ ಕೊಡಬೇಡಿ.. ಒಂದು ವೇಳೆ ಕೊಟ್ಟಲ್ಲಿ ಮುಂದಿನ ಅನಾಹುತಗಳಿಗೆ ವಾಹನ ಮಾಲಿಕರೇ ಜವಾಬ್ದಾರರು.   ನಿಮ್ಮ ವಾಹನಕ್ಕೆ Insurance ಕಟ್ಟದೆ ಇದ್ದಂತಹ ಸಂದರ್ಭದಲ್ಲಿ ಮಾರಣಾಂತಿಕ ಅಪಘಾತ ಸಂಭವಿಸಿದಲ್ಲಿ ವಾಹನ ಮಾಲಿಕರ ಹೆಸರಿನಲ್ಲಿ ಇರುವ ಆಸ್ತಿ ಜಪ್ತಿ ಮಾಡಿ ಬಂದ ಹಣವನ್ನು ಮರಣಹೊಂದಿದ ವ್ಯಕ್ತಿಯ ಅವಲಂಬಿತರಿಗೆ  ಕೊಡಲಾಗುತ್ತದೆ.     ಇನ್ನೊಂದು ಮಾಹಿತಿ ಇತ್ತೀಚೆಗೆ ಖರೀದಿಸಿದ ದ್ವಿಚಕ್ರ ವಾಹನದಾರರು 5 ವರ್ಷದ Insurance ಇದೆ ಎಂದು  ತಿಳಿದುಕೊಂಡಿದ್ದಾರೆ. 5 ವರ್ಷದ ವರೆಗೆ 3rd Party ಗೆ  ಮಾತ್ರ ಸಂಬಂಧಿಸಿದೆ. ಆದರೆ ದ್ವಿಚಕ್ರ ವಾಹನ ಸವಾರರಿಗೆ ಯಾವುದೇ ರಕ್ಷಣೆ ಇಲ್ಲ. ಆದ್ದರಿಂದ ಒಂದು ವರ್ಷದ ನಂತರ ಪ್ರತಿ ವರ್

KR ಪೇಟೆ‌: ಸಾಲಭಾಧೆಯಿಂದ ಮನನೊಂದು ರೈತನೋರ್ವ ನೆಣು ಬಿಗಿದುಕೊಂಡು ಆತ್ಮಹತ್ಯೆ.

ಇಮೇಜ್
ಕೆ ಆರ್ ಪೇಟೆ: ಸಾಲಭಾಧೆ, ನೇಣು ಬಿಗಿದುಕೊಂಡು  ರೈತ ಆತ್ಮಹತ್ಯೆ ಸಾಲಭಾಧೆಯಿಂದ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ. ಕೆ.ಆರ್. ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಮಾರ(65) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು,  ಮೃತ ರೈತ ೨ ಎಕರೆ ಜಮೀನು ಹೊಂದಿದ್ದ ರೈತ ಕೃಷಿಗಾಗಿ 5 ಲಕ್ಷ ಸಾಲ ಮಾಡಿದ್ದ. ಕೃಷಿಯಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಸಾಲಭಾಧೆಗೆ ಬೇಸತ್ತು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಈ ಸಂಬಂಧ ಕೆ.ಆರ್.ಪೇಟೆ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ವರದಿ : ಸಿ ಆರ್ ಜಗದೀಶ್ ಕೆ ಆರ್ ಪೇಟೆ, ಮಂಡ್ಯ ಜಿಲ್ಲೆ*

ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ

ಇಮೇಜ್
ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ  ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ ಕೆ. ಆರ್. ಪೇಟೆ ವರದಿ  ಮಂಡ್ಯ.  *ಕೆ.ಆರ್. ಪೇಟೆ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನುಮ ದಿನ ಆಚರಣೆ*  ಕೆ.ಆರ್. ಪೇಟೆ  ಪಟ್ಟಣದಲ್ಲಿ  ಇಂದು  ಕಾಂಗ್ರೆಸ್ ಪಕ್ಷದ ವತಿಯಿಂದ  ಪ್ರವಾಸಿ ಮಂದಿರದಲ್ಲಿ  ಗಿಡ ನೆಟ್ಟು, ಸಾರ್ವಜನಿಕ ಆಸ್ಪತ್ರೆಯ  ರೋಗಿಗಳಿಗೆ ಹಣ್ಣು  ಹಂಪಲು ವಿತರಿಸುವ ಮೂಲಕ  ಅರ್ಥ ಪೂರ್ಣ ವಾಗಿ  ಮಾಜಿ  ಮುಖ್ಯಮಂತ್ರಿ , ಹಾಗೂ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು  ಆಚರಿಸಿದರು. ನಂತರ ಮಾತನಾಡಿದ  ಕೆ ಆರ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಬಿ  ನಾಗೇಂದ್ರ ಕುಮಾರ್,  ಸಿದ್ದರಾಮಯ್ಯ ನವರು ಈ ನಾಡು ಕಂಡಂತ  ಶ್ರೇಷ್ಠ ರಾಜಕಾರಣಿಗಳಲ್ಲಿ  ಒಬ್ಬರು, ಅವರು  ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆ ಯಲ್ಲಿ  ಘೋಷಣೆ ಮಾಡಿದ್ದ  ಎಲ್ಲ  ಕಾರ್ಯಕ್ರಮಗಳನ್ನು  ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ. ಅವರು  ಒಂದು  ವರ್ಗಕ್ಕೆ , ಒಂದು ಜಾತಿಗೆ   ಒಂದು  ಧರ್ಮಕ್ಕೆ  ಸೀಮಿತವಾಗಿಲ್ಲ. ಅವರು  ಬಡವರ ಪರವಾಗಿ,  ಶೋಷಿತರಿಗೆ   ಧ್ವನಿಯಾಗಿದ್ದಾರೆ  ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ  ಜಾರಿಗೆ ತಂದಿರುವ ಜನಪರ  ಕಾರ್ಯಕ್ರಮಗಳನ್ನು