ಪೋಸ್ಟ್‌ಗಳು

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ‌ ಮಟ್ಟ

Sir, HEMAVATHI RESERVOIR  Dt- 31-08-2020  6.00 AM  Max Levl: 2922.00 ft Today's lvl :2920.53 ( 2921.57 )ft, Max Cap: 37.103 TMC  Today's cap: 35.68 ( 36.68 ) Tmc Live  cap : 31.31 ( 32.31 )Tmc   Inflow: 2492 ( 4203 )Cus, Outflow River: 1200 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(475) Cus, Total out flow : 5230 ( 4475 ) cus   note: corresponding last year readings are shown in bracket.

ತಂಬಾಕು ಮನೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಮನೆ

ಇಮೇಜ್
ರಾಮನಾಥಪುರ ಹೋಬಳಿಯ ಮಲ್ಲಾಪುರ ಊರಿನ ತಂಬಾಕು  ಬ್ಯಾರನ್ ಮನೆಗೆ ಆಕಸ್ಮಿಕ ಬೆಂಕಿ . ಮಲ್ಲಾಪುರ ಗ್ರಾಮದ ಮಲ್ಲೇಶ್ ರವರಿಗೆ ಸೇರಿದ ತಂಬಾಕು ಬ್ಯಾರನ್ ಮನೆಗೆ ಹೊಗೇಸಪ್ಪು ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಮನೆ‌‌ ಸಂಪೂರ್ಣ ಸುಟ್ಟು ಬಸ್ಮವಾಗಿದೆ.  ಹೊಗೆಸೊಪ್ಪು ಬ್ಯಾರನ್ ಮನೆಗೆ ಬೆಂಕಿ ಬಿದ್ದ ಪರಿಣಾಮ ಬೇಯಿಸುತ್ತಿದ್ದ ಹೋಗೆಸಪ್ಪು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಲ್ಲದೇ ತಂಬಾಕು ಮನೆಯಲ್ಲಿದ್ದ ಕಡ್ಡಿ ಫೋಲ್ಸ್ ಹಾಗೂ ಮನೆಯ ಮೇಲ್ಛಾವಣಿಯು ಸಹ ಸಂಪೂರ್ಣವಾಗಿ ಹಾನಿಯಾಗಿದೆ . ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಆಗಲೇ ಮನೆ ಸಂಪೂರ್ಣವಾಗಿ ಸುಟ್ಟ ಹೋಗಿದೆ. ಇದರಿಂದ ಮಲ್ಲೇಶ್ ಎಂಬುವರಿಗೆ ಸುಮಾರು 6 ರಿಂದ 7 ಲಕ್ಷಗಳಷ್ಟು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.  ತಂಬಾಕು ಮನೆ ಸುಟ್ಟು ಹೋಗಿದ್ದರಿಂದ ಅಲ್ಪ ಸ್ವಲ್ಪ ಪರಿಹಾರ ಬರುತ್ತದೆ ಆದರೂ ಇದು ಸಂಪೂರ್ಣವಾಗಿ ರೈತರ  ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂಬುದು ನೋವಿನ ಸಂಗತಿ

ಅರಕಲಗೂಡು ಪೇಟೆ ಮಾಚಗೌಡನಹಳ್ಳಿ‌‌ ಬಳಿ ರಸ್ತೆ ಅಪಘಾತ.

ಇಮೇಜ್
ಅರಕಲಗೂಡು ಪೇಟೆ ಮಾಚಗೌಡನಹಳ್ಳಿ ಬಳಿ  ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ   ಬೈಕ್ ಸವಾರ‌ ಪ್ರಜ್ಞೆ ತಪ್ಪಿದ್ದಾನೆ. ಅರಕಲಗೂಡು  ಪಟ್ಟಣದಲ್ಲಿ ಇರುವ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುಶೆಟ್ಟಿ‌ ಎಂದು ಗುರುತಿಸಲಾಗಿದೆ. ಅರಕಲಗೂಡು ತಾಲ್ಲೂಕಿನ  ದೊಡ್ಡಮಗ್ಗೆಯ ಗ್ರಾಮದವರು. ಎಂದು ಹೇಳಲಾಗಿದೆ.   ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ   ಮಂಜು ಶೆಟ್ಟಿ ರವರನ್ನು ಹಾಸನ ಜಿಲ್ಲಾಸ್ಪತ್ರೆ ಇಂದ  ರವಾನಿಸಲಾಗಿದೆ. ಮಧ್ಯಾಹ್ನದಿಂದಲೂ ರಸ್ತೆ ಮಧ್ಯದಲ್ಲಿಯೇ ನಿಂತಿದ್ದ ಲಾರಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪಂಕ್ಚರ್ ಆಗಿದ್ದ ಲಾರಿಯನ್ನು ಮಧ್ಯಾಹ್ನದಿಂದಲೂ ತೆರವುಗೊಳಿಸದೇ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಎಂದು ಸ್ಥಳಿಯರು ಹೇಳುತ್ತಿದ್ದು ಲಾರಿಯ ಹಿಂಬದಿಯಲ್ಲಿ ಯಾವುದೇ ರೇಡಿಯಂ ಪಲಕ ಹಾಕದೇ ಇದ್ದುದ್ದರಿಂದಲೇ  ರಾತ್ರಿ ಸಮಯದಲ್ಲಿ ನಿಂತಿದ್ದ ಲಾರಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.  ಆದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇನ್ನು ಅಪಘಾತಕ್ಕೆ ಸಂಬಂದಿಸಿದಂತೆ ಅರಕಲಗೂಡು ‌ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿರುತ್ತದೆ. 

ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ.

ಇಮೇಜ್
ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ..!  ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಮರಾಠಿಗರು. ಶಿವಸೇನೆ ಕಾರ್ಯಕರ್ತರು ಬಂದ ಮೇಲೆ ಹೆಚ್ಚಾದ ಗಲಾಟೆ  ಮರಾಠಿಗಳ ಮೇಲೆ ಲಾಟಿ ಚಾರ್ಜ್ ಮಾಡಿದ  ಪೋಲೀಸರು  ಪಿರನವಾಡಿ ಬಳಿ ಸೂಕ್ತ  ಬಂದೂಬಸ್ತ್ ಮರಾಠಿ ಪುಂಡರ ವಿರುದ್ದ ಕನ್ನಡಿಗರ ಆಕ್ರೋಶ.

ಹೇಮಾವತಿ ನದಿಯ ಇಂದಿನ ನೀರಿನ ಮಟ್ಟ

Sir, HEMAVATHI RESERVOIR  Dt- 28-08-2020  6.00 AM  Max Levl: 2922.00 ft Today's lvl :2921.29 ( 2921.50 )ft, Max Cap: 37.103 TMC  Today's cap: 36.41 ( 36.61 ) Tmc Live  cap : 32.04 ( 32.24 )Tmc   Inflow: 3102 ( 4451 )Cus, Outflow River: 800 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(50) Cus, Total out flow : 4830 ( 4050 ) cus   note: corresponding last year readings are shown in bracket.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಅರಕಲಗೂಡಿನಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದರು

ಇಮೇಜ್
ಅರಕಲಗೂಡು :: ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಹಾಗೂ ಕಾರ್ಯಕ್ರಮ ಪ್ರಧಾನ ಸಂಪಾಧಕರಾದ ರಾಘವೇಂದ್ರ ಹುಣುಸೂರ್ ರವರಿಗೂ  ನಾಡಿನ ಸಮಸ್ತ ನಾಗರೀಕರ ಪರವಾಗಿ ಕೃತಜ್ಞತೆ  ಅರ್ಪಿಸಿದ ಅಂಬೇಡ್ಕರ್ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ  ಬಾಬಾಸಾಹೇಬ್ ಅಂದರೇ... ಕ್ರಾಂತಿ ಹೋರಾಟ   ಬಾಬಾಸಾಹೇಬರು ತನ್ನ ತತ್ವ ಸಿದ್ಧಾಂತಗಳ ವಿರುದ್ಧ ಎಂದೂ ಎಲ್ಲಿಯೂ ಯಾರಿಗೂ ರಾಜಿಯಾದವರಲ್ಲ ಅವರೂ ಏಕಾಂಗಿಯಾಗಿ ಹೋರಾಟ ಮಾಡಿದರೂ ಕೂಡಾ  ಎಂದಿಗೂ ಮಾರಾಟವಾಗಲಿಲ್ಲ  ಆದ್ದರಿಂದ ವಿಶ್ವವೇ ತಿರುಗಿ ನೋಡುವಂತ  ಪರಿವರ್ತನಾ ಕ್ರಾಂತಿ ಮಾಡಿದರೆಂದ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಫ್ಲೆಕ್ಸ್ ಬ್ಯಾನರ್ ಅಳವಡಿಸುವಿಕೆ ಸಂಧರ್ಭದಿ ಮಾತನಾಡಿದ ಅವರು  ಯಾವುದೇ ಧರ್ಮ ಜಾತಿ ಮೀರಿದ ಪ್ರಜ್ಞಾವಂತರು ಅಂಬೇಡ್ಕರ್ ಕುರಿತು ವಾಸ್ತವ ನೈಜ ಸತ್ಯ ಮಾತನಾಡುತ್ತಾರೆ  ಇದಕ್ಕೆ  ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಲ್ಲಿ ಸ್ವರಸಾಮ್ರಾಟ್ ಹಂಸಲೇಖರವರು ಬಾಬಾ ಸಾಹೇಬರ ಬಗ್ಗೆ ಆಡಿದ ಮಾತುಗಳೇ  ಸಾಕ್ಷಿ ಎಂದ ಅವರು ಇದುವರೆಗೂ ಕಾಲ್ಪನಿಕ ಕಟ್ಟು ಕಥೆ ರಂಜನೀಯ ಕಥೆಗಳ ಧಾರವಾಹಿ ನೀಡಿದ ವಾಹಿನಿಯು ಪ್ರಥಮಭಾರಿಗೆ ಕಿರುತೆರೆಯಲ್ಲೇ ಒಬ್ಬ ಸಾಧಕನ ನೈಜ ಬದುಕನ್ನು ಧಾರವಾಹಿಯಾಗಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಕಾರ್ಯಕ್ರಮ ಸಂಪಾ

ಅರಸೀಕಟ್ಟೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುವುದು

ಇಮೇಜ್
ಅರಕಲಗೂಡು:  ತಾಲ್ಲೂಕಿನ ಅರಸಿಕಟ್ಟೆ ಅಮ್ಮ ದೇವಾಲಯವನ್ನು ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಪಡಿಸಲು ಶಾಸಕ ಎ. ಟಿ. ರಾಮಸ್ವಾಮಿ ನಕ್ಷತ್ರ ವನ ಹಾಗೂ ನವಗ್ರಹ ವನ ನಿರ್ಮಾಣಕ್ಕೆ ಧಾರ್ಮಿಕ ಸಂಕೇತವಾದ ಅತ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ತಾಲ್ಲೂಕಿನ ಶಕ್ತಿ ದೇವತೆಯಲ್ಲಿ ಒಂದಾದ  ಅರಸಿಕಟ್ಟೆ ಅಮ್ಮ ದೇವಾಲಯವು ರಾಜ್ಯಾದ್ಯಂತ ಭಕ್ತಾದಿಗಳನ್ನು ಹೊಂದಿದ್ದು ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಜನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪೂಜೆ ಸಲ್ಲಿಸಿ ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ನೀಡಿ ನಂತರ ತಮ್ಮ ಕುಟುಂಬ ನೆಂಟರುಗಳ ಜೊತೆ ಕುಡಿ ಊಟ ಸೇವಿಸುವ ರೂಢಿಯಲ್ಲಿದೆ ಅದರಿಂದ ದೇವಾಲಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತವಾಗಿ ಹಾಗೂ ಸುಂದರವಾದ ತಾಣವಾಗಿ ನಿರ್ಮಾಣ ಮಾಡುವ ಸದ್ದುಉದೇಶದಿಂದ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ವಿವಿಧ ಬಗ್ಗೆ ಹೂವಿನ ಗಿಡ ಹಾಗೂ ಬಗ್ಗೆಯ  ಹಣ್ಣಿನ ಗಿಡ ನೆಡಲಾಗಿದೆ ಜೊತೆಗೆ ಧಾರ್ಮಿಕ ಕ್ಷೇತ್ರದ ಸಂಕೇತವಾದ ನಕ್ಷತ್ರ ವನ ಹಾಗೂ ನವಗ್ರಹ ವನ  ನಿರ್ಮಾಣ ಮಾಡಲು ಅರಣ್ಯ ಇಲಾಖೆ ವತಿಯಿಂದ ಅಗತ್ಯ ವಿವಿಧ  9 ನಮೂನೆಯ ಗಿಡಗಳನ್ನು ಇಂದು ನೆಡಲಾಯಿತ್ತು ಮತ್ತು ಕುಡಿಯುವ ನೀರು ವ್ಯವಸ್ಥೆ ಊಟ ತಯಾರಿಸಲು ಕೊಠಡಿಗಳು ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಲು ಚಾಲನೆ ಮಾಡಲಾಗಿದೆ ಎಂದು ತಿಳಿಸಿದರು   ಜಿಲ್ಲಾ ವಲಯ ಅರಣ್ಯಾಧಿಕಾರಿ ಶಿವರಾಮ